ವಿಚಾರ ಸಾಹಿತ್ಯ
ಕನ್ನಡ ಮರಾಠಿ ನಂಟು: ಮುನ್ನೋಟ
- ಡಾ.ಕೆ.ವಿ.ನಾರಾಯಣ -
ಕನ್ನಡ ಮತ್ತು ಮರಾಠಿ ನುಡಿ ಸಂಸ್ಕೃತಿಗಳ ನಡುವಣ ನಂಟು ಹಲವು ಶತಮಾನಗಳಷ್ಟು ದೀರ್ಘವಾದುದು. ಈ ಎರಡೂ ನುಡಿಗಳ ಹುಟ್ಟು ಬೆಳವಣಿಗೆಗಳ ನಡುವೆಯೂ ಕೆಲವು ಹಂಚಿಕೊಂಡ ಎಳೆಗಳಿವೆ. ಈ ನುಡಿಗಳನ್ನಾಡುವ ರಾಜ್ಯಗಳ ನಡುವೆ ರಾಜಕೀಯ ಕಾರಣಗಳಿಂದ ಎಳೆದ ಗಡಿಗೆರೆಗಳಿವೆಯಾದರೂ ಜನರ ಬದುಕಿನ ಹರವು ಒಡಕಿಲ್ಲದೆ ಹರಡಿಕೊಂಡಿದೆ. ಎರಡು ನುಡಿಗಳ ಬರಹಗಳು ಒಂದರಿಂದ ಇನ್ನೊಂದಕ್ಕೆ ಚಲಿಸುವ ಬಗೆಯೂ ಹಿಂದಿನಿಂದ ನಡೆದುಬಂದಿದೆ. ಹೊಸ ಕಾಲದಲ್ಲಿಯೂ ಮುಂದುವರಿಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರುವ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ರೂಪದ ಈ ಪುಸ್ತಕವು ಕನ್ನಡ-ಮರಾಠಿ ಅನುವಾದದ ಹೊಸ ಸಾಧ್ಯತೆಗಳು ಮರಾಠಿ-ಕನ್ನಡ ರಂಗಭೂಮಿ. ಕನ್ನಡಕ್ಕೆ ಅನುವಾದಗೊಂಡಿರುವ ಮರಾಠಿ ಕಥನ ಸಾಹಿತ್ಯ. ಮರಾಠಿಯಲ್ಲಿ ಕನ್ನಡ, ಕನ್ನಡ ಮರಾಠಿ ಅನುವಾದ ಪ್ರಕ್ರಿಯೆ; ಹೊಸ ದಿಕ್ಕುಗಳ ಸಾಧ್ಯತೆ ಎಂಬ ಲೇಖನಗಳನ್ನು ಒಳಗೊಂಡಿದೆ.
ಪುಸ್ತಕದ ಕೋಡ್ |
KBBP 0280 |
ಪ್ರಕಾರಗಳು |
ವಿಚಾರ ಸಾಹಿತ್ಯ
|
ಲೇಖಕರು |
ಡಾ.ಕೆ.ವಿ.ನಾರಾಯಣ |
ಭಾಷೆ |
ಕನ್ನಡ |
ಪ್ರಕಟಿತ ವರ್ಷ |
2016 |
ಬೆಲೆ |
₹
40/-
|
ರಿಯಾಯಿತಿ |
50% |
ಪಾವತಿಸಬೇಕಾದ ಮೊತ್ತ |
₹ 20/- |
ಪುಟಗಳು |
87 |
ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.
ಬಯಕೆ ಪಟ್ಟಿ